ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದಸದಸ್ಯರಿಗೆ ವಂದನೆಗಳು.
ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾಸಮಿತಿಸದಸ್ಯರಿಗೆಮತ್ತುಯುವಕ–ಯುವತಿಯರಿಗೆ ಕೃತಜ್ಞತೆಗಳು.
ಬಲಿಪೂಜೆ ನಂತರ ಮರಿಯಮ್ಮನವರಸೈನ್ಯದಸಭೆಮತ್ತುಯುವಕ–ಯುವತಿಯರಿಗೆಸಭೆಇರುವುದು; ಸದಸ್ಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ 3ನೇವಲಯ (ಜಪಮಾಲೆಮಾತೆವಲಯ)ದ ಸದಸ್ಯರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
05-03-2021, ಕಳೆದ ಶುಕ್ರವಾರದ ಶಿಲುಬೆಹಾದಿ ಮತ್ತು ಬಲಿಪೂಜೆಗೆ ಸಹಾಯಮಾಡಿದ 5ನೇ ಮತ್ತು 6ನೇ ವಲಯದ ಸರ್ವರಿಗೂ ಕೃತಜ್ಞತೆಗಳು.
ಬರುವ 12-03-2021ಶುಕ್ರವಾರ ಬೆಳಿಗ್ಗೆ ಬಲಿಪೂಜೆ ಇರುವುದಿಲ್ಲ. ಸಂಜೆ 6-00 ಗಂಟೆಗೆಶಿಲುಬೆಹಾದಿಮತ್ತುಬಲಿಪೂಜೆ ಇರುವುದು ಹಾಗೂ 7ನೇ ಮತ್ತು 8ನೇ ವಲಯದ ಸದಸ್ಯರು ಸಹಾಯಮಾಡಲು ಆಹ್ವಾನಿಸುತ್ತೇನೆ, ದಾನಿಗಳು ಭೋಜನ ವ್ಯವಸ್ಥೆ ಮಾಡಿರುತ್ತಾರೆ, ದಯಮಾಡಿ ಸಹಕರಿಸಿ.
ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು 4ನೇವಲಯ (ಕಾರ್ಮೆಲ್ಮಾತೆವಲಯ)ದಕುಟುಂಬಗಳನ್ನು ಆಹ್ವಾನಿಸುತ್ತೇನೆ.
ಬರುವ 14-03-2021, ಭಾನುವಾರ ನಮ್ಮ ಧರ್ಮಕೇಂದ್ರದಲ್ಲಿ ಒಂದು ದಿನದ ತಪಸ್ಸು ಕಾಲದ ಧ್ಯಾನಕೂಟವನ್ನು ನಡೆಸುತ್ತೇವೆ. ಚಿಕ್ಕಮಗಳೂರು ಧರ್ಮಕ್ಷೇತ್ರದ ಫಾ ಪ್ಯಾಟ್ರಿಕ್ ಜೋನಾಸ್ರವರು ಇದನ್ನು ನಡೆಸಿಕೊಡುತ್ತಾರೆ. ಸರ್ವರೂ ಭಾಗವಹಿಸಿ, ಇತರರಿಗೂ ತಿಳಿಸಿ ತಪಸ್ಸುಕಾಲದ ವರಪ್ರಸಾದವನ್ನು ಪಡೆದುಕೊಳ್ಳೋಣ.