ಪ್ರಕಟಣೆಗಳು 13-09-2020

ಸಾಧಾರಣ ಕಾಲದ 24ನೇ ಭಾನುವಾರ

  • 14-09-2020, ಸೋಮವಾರ, ಯೇಸುವಿನ ಶಿಲುಬೆಯ ವಿಜಯದ ಹಬ್ಬ
  • 15-09-2020, ಮಂಗಳವಾರ, ವ್ಯಾಕುಲ ಮಾತೆ ಮರಿಯಳ ಸ್ಮರಣೆ
  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
  • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾ ಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
  • 24-08-2020, ಸೋಮವಾರ ಬಲಿಪೂಜೆ ಸಂಜೆ 630ಕ್ಕೆ ಇರುವುದು.
  • ಬಲಿಪೂಜೆ ನಂತರ ಯುವಕ-ಯುವತಿಯರಿಗೆ ಸಭೆ ಇರುವುದು; ಯುವಕ-ಯುವತಿಯರು ತಪ್ಪದೆ ಭಾಗವಹಿಸುವಂತೆ ವಿನಂತಿಸುತ್ತೇನೆ.
  • ಬಲಿಪೂಜೆಯ ನಂತರ ವಿನ್ಸೆಂಟ್‍ ದಿಪೌಲ್‍ ಸಭೆ ನಡೆಯುವುದು. ದಯಮಾಡಿ ಸದಸ್ಯರು ತಪ್ಪದೆ ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
  • ಬಲಿಪೂಜೆಯ ನಂತರ ಮರಿಯಮ್ಮನವರ ಸೈನ್ಯದ ಸಭೆ ನಡೆಯುವುದು. ದಯಮಾಡಿ ಸದಸ್ಯರು ತಪ್ಪದೆ ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
  • ಬರುವ ಭಾನುವಾರ 20-09-2020, ಶಾಲೆಯ ಆವರಣವನ್ನು ಪೋಲಿಸ್‍ ಪರೀಕ್ಷೆಗಾಗಿ ವಶಪಡಿಸಿಕೊಳ್ಳುವುದರಿಂದ ಬಲಿಪೂಜೆ ಬೆಳಿಗ್ಗೆ 7-00 ಗಂಟೆಗೆ ಇರುವುದು. ದಯಮಾಡಿ ಸಹಕರಿಸಿಕೊಳ್ಳುವಂತೆ ಕೇಳಿಕೊಳ್ಳುತ್ತೇನೆ.
  • ಧನ್ಯವಾದಗಳು
  • ಸಹಿ/-