ಪ್ರಕಟಣೆಗಳು 11-10-2020

ಸಾಧಾರಣ ಕಾಲದ 28ನೇ ಭಾನುವಾರ

  • 15-10-2020, ಗುರುವಾರ, ಅವಿಲದ ಸಂತ ತೆರೆಸರ ಸ್ಮರಣೆ
  • 16-10-2020, , ಶುಕ್ರವಾರ ಸಂತ ಮಾರ್ಗರೆಟ್‍ ಮೇರಿ ಆಲೋಕ್ವೆಯವರ ಸ್ಮರಣೆ
  • 17-10-2020, ನಿವಾರ, ಅಂತಿಯೋಕ್ಯದ ಸಂತ ಇಗ್ನೇಷಿಯಸ್‍ರ ಸ್ಮರಣೆ
  • 18-10-2020, ಭಾನುವಾರ, ವಿಶ್ವ ಸುವಾರ್ತಾ ಪ್ರಚಾರ ಭಾನುವಾರ
  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
  • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
  • 12-10-2020, ಸೋಮವಾರ ಬಲಿಪೂಜೆ ಸಂಜೆ 6.30ಕ್ಕೆ ಇರುವುದು.
  • ಬಲಿಪೂಜೆ ನಂತರ ಯುವಕಯುವತಿಯರಿಗೆ ಸಭೆ ಇರುವುದು; ಯುವಕ-ಯುವತಿಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
  • ಬಲಿಪೂಜೆಯ ನಂತರ ಮರಿಯಮ್ಮನವರ ಸೈನ್ಯದ ಸಭೆ ನಡೆಯುವುದು. ದಯಮಾಡಿ ಸದಸ್ಯರು ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
  • ಬಲಿಪೂಜೆಯ ನಂತರ ವಿನ್ಸೆಂಟ್‍ ದಿಪೌಲ್‍ ಸಭೆ ನಡೆಯುವುದು. ದಯಮಾಡಿ ಸದಸ್ಯರು ತಪ್ಪದೆ ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
  • ಬರುವ ಭಾನುವಾರ, ಅಕ್ಟೋಬರ್‍ 18, ವಿಶ್ವ ಸುವಾರ್ತಾ ಪ್ರಚಾರ ಭಾನುವಾರ, ಅಂದಿನ ಕಾಣಿಕೆಯನ್ನು ಧರ್ಮಾಧ್ಯಕ್ಷರ ನಿವಾಸಕ್ಕೆ ಕಳುಹಿಸಿಕೊಡಲಾಗುವುದು.
  • ಬರುವ ಭಾನುವಾರ, ಅಕ್ಟೋಬರ್‍ 18, ಶಾಲೆಯ ಆವರಣವನ್ನು ಪೋಲಿಸ್ಪರೀಕ್ಷೆಗಾಗಿ ವಶಪಡಿಸಿಕೊಳ್ಳುವುದರಿಂದ ಬಲಿಪೂಜೆ ಬೆಳಿಗ್ಗೆ 7-00 ಗಂಟೆಗೆ ಇರುವುದು. ದಯಮಾಡಿ ಸಹಕರಿಸುವಂತೆ ಕೇಳಿಕೊಳ್ಳುತ್ತೇನೆ.
  • ಈಗಾಗಲೇ ವರದಿ ತಲುಪಿಸಿದ್ದವರ ಕುಟುಂಬ ಪುಸ್ತಕಗಳು ಸಿದ್ಧಪಡಿಸಲಾಗುತ್ತಿದೆ, ಅದನ್ನು ನಿಮಗೆ ತಲುಪಿಸಲಾಗುವುದು. ಆನಂತರ, ಮಾಸಿಕ ವಂತಿಗೆಯನ್ನು ಸಲ್ಲಿಸಬಹುದಾಗಿದೆ.
  • ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ದೇವಮಾತೆ ವಲಯ (ಕ್ಯಾತಂಗೆರೆ, PES ಬಡಾವಣೆ & ವಿನಾಯಕ ಬಡಾವಣೆ)ದ ಎಲ್ಲಾ ಕುಟುಂಬಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
  • ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ಜಪಮಾಲೆ ಮಾತೆ ವಲಯ (ಶಂಕರನಗರ)ದ ಎಲ್ಲಾ ಕುಟುಂಬಗಳನ್ನು ಆಹ್ವಾನಿಸುತ್ತೇನೆ.
  • ಧನ್ಯವಾದಗಳು
  • ಸಹಿ/-